ಜಿಟ್ಟಿಹುಳಗಳು ಎದ್ದಾವು ನೋಡು

ಜಿಟ್ಟಿಹುಳಗಳು ಎದ್ದಾವು ಇದು ನೋಡು
ಸೃಷ್ಟಿಪತಿ ಅರಸರಿಗೆಲ್ಲಾ ಕೇಡೋ
ಅಷ್ಟದಶಮಧ್ಯದಲಿ ಒಪ್ಪುವ ನೆಟ್ಟನಾದಿಭೂಮಿ ದಿಲ್ಲಿಗೆ
ಶ್ರೇಷ್ಠಕ್ರಿಸ್ತಾನಬಾದಶಹ ಪಟ್ಟಗಟ್ಟಲು ಕಂಡು ||ಪ||

ವಸುಮತಿಪತಿ ವರದಿಂ ಕುಮಾರ
ಈಶಾನ್ಯೆಂಬುವ ಪರಮನವತಾರಾ
ರೋಸಬಾದಶಾ ಇಂಗ್ಲೀಷಮತವನುದ್ಧರಿಸಲು
ಬಹುಧಾನ್ಯನ ಸಂವತ್ಸರಕೆ ಉತ್ತಮ ಬೇಸಿಗ ಬರಹವ ಕೇಳಿ ||೧||

ಕ್ಷೋಣಿಗೆ ಆಧಿಕಾರಕೊಟ್ಟು ಕಂಪನಿಗೆ
ರಾಣಿ ದೊರೆ ತಾನು ಕಟ್ಟಾಕಾನೂನಿಗೆ
ಜಾಣತನದಲಿ ಇಳಿಯನಾಳುತ ತಾನೇ ತಾನೇ‌ಆಗಿ ಕಲಿಯುಗ
ಪ್ರಾಣ ನಿರ್ಮಲಪಾದದಲಿ ಭೂ ಅಣಿದು ತಲ್ಲಣಿಸಕೆ ||೨||

ಮಜದಲಿ ಪೇಳುವೆ ಮೌಜಿನ ಮಾತು
ಮೂಜಗದೊಳು ಆತಿಕೌತುಕವಾತು
ರಾಜ್ಯದಲಿ ಯಾವತ್ತು ದೇಶದ ಪಾಳ್ಯಾಗಾರರು ಪರಮಡಿಸಿ ಮಹಾ-
ರಾಜ್ಯ ಕೋರ್ಟಿಗೆ ಒಯ್ದರೆಂಬುವ ಸುದ್ಧಿ ಕೇಳಿ ||೩||

ಧರ್ಮದಾತಾ ಶಿಶುವಿನಾಳಧೀಶಾ
ಊರ್ವಿ ಪಾಲಿಸಿದನು ಇಷ್ಟುದಿವಸಾ
ಕರ್ಮಕಟ್ಟಳೆ ತೀರಿಸಿ ಮೂವತ್ತು-
ವರ್ಷ ಮುಂದ ಹದಿನೈದು ಇರುತಿರೆ
ಮೊಗಲ ವಿಲಾಯತಿ ಪಟ್ಟಕ್ಕೆ ಕರ್ಮ ತಟ್ಟಲು ಕಂಡು ಜಿಟ್ಟಿಹುಳ ||೪||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಪಥ
Next post ಜಗದಳಿಲು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys